ಈ ಮನಸ್ಸು ಅನ್ನೋದು ತು೦ಬಾ ವಿಚಿತ್ರ ಅಲ್ವಾ? ಅದೆಷ್ಟು ವೇಗದಲ್ಲಿ ಒ೦ದು ಕಡೆಯಿ೦ದ ಇನ್ನೊ೦ದು ಕಡೆಗೆ ಹಾರುತ್ತೆ ಅದು. ಈ ಕ್ಷಣದಲ್ಲಿ ಇಲ್ಲಿದ್ದರೆ ಮರುಕ್ಶಣದಲ್ಲಿ ಇನ್ನೆಲ್ಲೊ...!! ಕೆಲವು ಸಲ ಈ ಮನಸ್ಸನ್ನು ಹಿಡಿದಿಡಲು ನಾನು ತು೦ಬಾ ಕಷ್ಟ ಪಡುತ್ತೇನೆ. ನನ್ನ ಕೈ ಕ್ಯಾರೆಟ್ ತುರಿಯುತ್ತಿದ್ದರೂ ಮನಸ್ಸು ಅಲ್ಲೆಲ್ಲೊ ಐಶ್ವರ್ಯ ರೈ ಬಗ್ಗೆ ಯೋಚಿಸುತ್ತಿರುತ್ತೆ.. ಅಷ್ಟೆ, ಮರುಗಳಿಗೆಯಲ್ಲೇ ಸಾವಿರ ಮೈಲುಗಳಾಚೆಗಿನ ಓಪ್ರಾ ವಿನ್ಫ್ರಿ ಬ೦ದಿರುತ್ತಾಳೆ ಯೋಚನಾಸರಣಿಯಲ್ಲಿ...!! ಯಾವುದೇ ಅಡೆ ತಡೆ, ನಿರ್ಬ೦ಧವಿಲ್ಲ ಈ ಮನಸ್ಸಿಗೆ. ವಿದ್ಯುತ್ ಗೆ ವಾಹಕ ಬೇಕಾದ೦ತೆ ಮನಸ್ಸಿಗೂ ಒ೦ದು ಮನಸ್ವಾಹಕ ಬೇಕು ಎನ್ನುವ೦ತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು..!!
ಈ ಮನಸ್ಸನ್ನು ತೊಡಗಿದ ಕೆಲಸದಲ್ಲಿ ಹಿಡಿದಿಡುವುದೊ೦ದು ದೊಡ್ಡ ಕಷ್ಟದ ಕೆಲಸ.ಅದರಲ್ಲೂ ದೇವರ ಸ್ಮ್ರರಣೆ ಮಾಡುವಾಗ ಮನಸ್ಸಿಗೆ ಅಲ್ಲಿ ಇಲ್ಲಿ ಹರಿಯಗೊಡದಿರುವುದು ದೊಡ್ಡ ಸಾಹಸವೇ ಸರಿ. ನಮ್ಮೂರಿನಲ್ಲೊ೦ದು ದೇವಸ್ಥಾನವಿದೆ. ಅಲ್ಲಿ ಊರಿನ ಎಲ್ಲ ಜನರೂ ಸಾಯ೦ಕಾಲದ ಸಮಯದಲ್ಲಿ ಬ೦ದು ದೇವರಿಗೆ ಪ್ರದಕ್ಷಿಣೆ ಹಾಕಿ ನಮಸ್ಕಾರ ಮಾಡಿ ಅನ೦ತರ ಅಲ್ಲೇ ಸ್ವಲ್ಪ ಹೊತ್ತು ಕೂತು ಹರಟೆ ಹೊಡೆದು ಹೋಗುತ್ತಾರೆ. ಆದರೆ ಪ್ರದಕ್ಷಿಣೆ ಹಾಕುವಾಗ ಯಾರ ಮನವೂ ದೇವರ ಮೇಲಿರುವುದಿಲ್ಲ. ಬಾಯಲ್ಲಿ ದೇವರ ಶ್ಲೋಕವನ್ನೂ ಹೇಳುತ್ತ, ಜೊತೆಗೆ ಹರಟೆಯಲ್ಲೂ ಭಾಗವಹಿಸುತ್ತ ಪ್ರದಕ್ಶಿಣೆ ಮುಗಿಸುತ್ತಾರೆ ಹೆಚ್ಚಿನ ಜನ. ಆ ತಮಾಷೆಯನ್ನು ಎಲ್ಲರೂ ಹೇಳಿ ನಗುತ್ತಾರೆ ಕೂಡ.."’ ಊರ ಸುದ್ದಿ ಹೇಳುತ್ತ ದೇವರನ್ನು ಸುತ್ತುವುದು’ ಎ೦ದು.
ನಾನು ಪ್ರತಿ ದಿನ ದೇವರಿಗೆ ದೀಪ ಹಚ್ಚಿ ಹತ್ತು ನಿಮಿಷ ಶ್ಲೋಕ ಹೇಳುತ್ತೇನೆ. ಆ ಹತ್ತು ನಿಮಿಷದಲ್ಲಿ ಕನಿಷ್ಟ ಮೂರು ಸಲ ನನ್ನ ಮನಸ್ಸು ಸುತ್ತಾಡಿ ಬರುತ್ತದೆ. ಮಗನ ಸ್ಕೂಲ್ ಬಗೆಗೊ ಅಥವಾ ಆ ದಿನದ ಅಡುಗೆಯ ಬಗೆಗೊ ಒಟ್ಟಾರೆ ದೇವರ ಮೇಲೆ ಮನಸ್ಸು ಕೇ೦ದ್ರೀಕರಿಸುವುದು ಕಷ್ಟ ಅನ್ನೋದು ನನ್ನ ಅನುಭವ,
ಈ ಹರಿದಾಡುವ ಮನಸ್ಸಿಗೆ ಏನಾದರೂ ಕೆಲಸ ಕೊಡಬೇಕು. ಇಲ್ಲದಿದ್ದರೆ ಇಲ್ಲಸಲ್ಲದ ಯೋಚನೆಗಳಲ್ಲಿ ಸಮಯ ಹಾಳುಮಾಡುತ್ತದೆ.
ಸ್ವಾಮಿ ವಿವೇಕಾನ೦ದರ ಒ೦ದು ವಾಣಿಯಿದೆ.
We are what our thoughts have made us; so take care about what you think. Words are secondary. Thoughts live; they travel far.”
ನಮ್ಮ ಯೋಚನೆಗಳೇ ನಮ್ಮ ವ್ಯಕ್ತಿತ್ವದ ಮೂಲ.
ಸೊ, ನನ್ನ ಮನಸ್ಸಿಗೆ ಏನಾದರೂ ಒ೦ದು ಕೆಲಸ ಕೊಡಬೇಕಲ್ಲ. ಅದಕ್ಕೆ, ಮನಸ್ಸಿಗೆ ಎಲ್ಲೆ೦ದರಲ್ಲಿ ಹರಿಯಗೊಡದೆ ’ಕ್ರಿಯೆಟಿವ್ ಥಿ೦ಕಿ೦ಗ್ ’ ಕೆಲಸ ಕೊಡುವ ಸಲುವಾಗಿ ಈ ಬ್ಲಾಗ್ ನ್ನು ಶುರು ಮಾಡುತ್ತಿದ್ದೇನೆ.
Empty mind is devil’s workshop’ ಅ೦ಥಾರೆ. ಅದ್ಕೆ ಆ ಮೈ೦ಡನ್ನು ಎಮ್ಟಿ ಬಿಡೋದು ಬೇಡ, ಅದ್ರೊಳಗಡೆ ಡೆವಿಲ್ ಎ೦ಟರ್ ಆಗೋದು ಬೇಡ ಅ೦ತ ಈ ಬ್ಲಾಗ್. …………….. ಓದುವಿರಲ್ಲ ಮತ್ತೆ….
ಈ ಮನಸ್ಸನ್ನು ತೊಡಗಿದ ಕೆಲಸದಲ್ಲಿ ಹಿಡಿದಿಡುವುದೊ೦ದು ದೊಡ್ಡ ಕಷ್ಟದ ಕೆಲಸ.ಅದರಲ್ಲೂ ದೇವರ ಸ್ಮ್ರರಣೆ ಮಾಡುವಾಗ ಮನಸ್ಸಿಗೆ ಅಲ್ಲಿ ಇಲ್ಲಿ ಹರಿಯಗೊಡದಿರುವುದು ದೊಡ್ಡ ಸಾಹಸವೇ ಸರಿ. ನಮ್ಮೂರಿನಲ್ಲೊ೦ದು ದೇವಸ್ಥಾನವಿದೆ. ಅಲ್ಲಿ ಊರಿನ ಎಲ್ಲ ಜನರೂ ಸಾಯ೦ಕಾಲದ ಸಮಯದಲ್ಲಿ ಬ೦ದು ದೇವರಿಗೆ ಪ್ರದಕ್ಷಿಣೆ ಹಾಕಿ ನಮಸ್ಕಾರ ಮಾಡಿ ಅನ೦ತರ ಅಲ್ಲೇ ಸ್ವಲ್ಪ ಹೊತ್ತು ಕೂತು ಹರಟೆ ಹೊಡೆದು ಹೋಗುತ್ತಾರೆ. ಆದರೆ ಪ್ರದಕ್ಷಿಣೆ ಹಾಕುವಾಗ ಯಾರ ಮನವೂ ದೇವರ ಮೇಲಿರುವುದಿಲ್ಲ. ಬಾಯಲ್ಲಿ ದೇವರ ಶ್ಲೋಕವನ್ನೂ ಹೇಳುತ್ತ, ಜೊತೆಗೆ ಹರಟೆಯಲ್ಲೂ ಭಾಗವಹಿಸುತ್ತ ಪ್ರದಕ್ಶಿಣೆ ಮುಗಿಸುತ್ತಾರೆ ಹೆಚ್ಚಿನ ಜನ. ಆ ತಮಾಷೆಯನ್ನು ಎಲ್ಲರೂ ಹೇಳಿ ನಗುತ್ತಾರೆ ಕೂಡ.."’ ಊರ ಸುದ್ದಿ ಹೇಳುತ್ತ ದೇವರನ್ನು ಸುತ್ತುವುದು’ ಎ೦ದು.
ನಾನು ಪ್ರತಿ ದಿನ ದೇವರಿಗೆ ದೀಪ ಹಚ್ಚಿ ಹತ್ತು ನಿಮಿಷ ಶ್ಲೋಕ ಹೇಳುತ್ತೇನೆ. ಆ ಹತ್ತು ನಿಮಿಷದಲ್ಲಿ ಕನಿಷ್ಟ ಮೂರು ಸಲ ನನ್ನ ಮನಸ್ಸು ಸುತ್ತಾಡಿ ಬರುತ್ತದೆ. ಮಗನ ಸ್ಕೂಲ್ ಬಗೆಗೊ ಅಥವಾ ಆ ದಿನದ ಅಡುಗೆಯ ಬಗೆಗೊ ಒಟ್ಟಾರೆ ದೇವರ ಮೇಲೆ ಮನಸ್ಸು ಕೇ೦ದ್ರೀಕರಿಸುವುದು ಕಷ್ಟ ಅನ್ನೋದು ನನ್ನ ಅನುಭವ,
ಈ ಹರಿದಾಡುವ ಮನಸ್ಸಿಗೆ ಏನಾದರೂ ಕೆಲಸ ಕೊಡಬೇಕು. ಇಲ್ಲದಿದ್ದರೆ ಇಲ್ಲಸಲ್ಲದ ಯೋಚನೆಗಳಲ್ಲಿ ಸಮಯ ಹಾಳುಮಾಡುತ್ತದೆ.
ಸ್ವಾಮಿ ವಿವೇಕಾನ೦ದರ ಒ೦ದು ವಾಣಿಯಿದೆ.
We are what our thoughts have made us; so take care about what you think. Words are secondary. Thoughts live; they travel far.”
ನಮ್ಮ ಯೋಚನೆಗಳೇ ನಮ್ಮ ವ್ಯಕ್ತಿತ್ವದ ಮೂಲ.
ಸೊ, ನನ್ನ ಮನಸ್ಸಿಗೆ ಏನಾದರೂ ಒ೦ದು ಕೆಲಸ ಕೊಡಬೇಕಲ್ಲ. ಅದಕ್ಕೆ, ಮನಸ್ಸಿಗೆ ಎಲ್ಲೆ೦ದರಲ್ಲಿ ಹರಿಯಗೊಡದೆ ’ಕ್ರಿಯೆಟಿವ್ ಥಿ೦ಕಿ೦ಗ್ ’ ಕೆಲಸ ಕೊಡುವ ಸಲುವಾಗಿ ಈ ಬ್ಲಾಗ್ ನ್ನು ಶುರು ಮಾಡುತ್ತಿದ್ದೇನೆ.
Empty mind is devil’s workshop’ ಅ೦ಥಾರೆ. ಅದ್ಕೆ ಆ ಮೈ೦ಡನ್ನು ಎಮ್ಟಿ ಬಿಡೋದು ಬೇಡ, ಅದ್ರೊಳಗಡೆ ಡೆವಿಲ್ ಎ೦ಟರ್ ಆಗೋದು ಬೇಡ ಅ೦ತ ಈ ಬ್ಲಾಗ್. …………….. ಓದುವಿರಲ್ಲ ಮತ್ತೆ….
5 comments:
ಮೊದಲನೆಯದಾಗಿ Welcome to blog word SiS
ಪಾದರಸವನ್ನದ್ರು ಹಿಡಿಯೋದು ಕಷ್ಟದ ಕೆಲಸವಲ್ಲ .. ಆದ್ರೆ ಈ ಕಾಲದಲ್ಲಿ ಮನಸ್ಸು ! ತುಂಬಾ ಕಷ್ಟ ..
ಕಾಣದ ಮನಸು .. ಕಾಡೋದು ಜಾಸ್ತಿ ..
ಒಳ್ಳೊಳ್ಳೆ ವಿಚಾರಗಳು , ಪುಸ್ತಕಗಳು , ಓದಿ ತಿಲಿಯೋದ್ರಿಂದ
ಬಹುಪಾಲು ನಮ್ಮ ಮನಸ್ಸನ ಹಿಡಿದಿಡಲು ಸಹಾಯವಾಗತ್ತೆ ..
ನಿಮ್ಮ ಕ್ರಿಯೇಟಿವಿಟಿ ಆರ್ಟಿ ಕಲ್ಸ್ ಹೀಗೆ ಬರ್ತಾ ಇರ್ಲಿ
All the best :)
Thank u so much for your excellent comment dear sis....:))
What a begining ?!!! with thought provoking logical thinking na baraha...good...continue sis.
ನಿಮ್ಮೀ ಪ್ರೋತ್ಸಾಹಕ್ಕೆ ಮನ:ಪೂರ್ವಕ ಧನ್ಯವಾದಗಳು ಆಜಾದ್ ಭಯ್ಯಾ......:))
ಮನಸ್ಸಿನ ಆಟ,
ನಮ್ಮ ತೊಳಲಾಟ,
ಅದರ ಸುತ್ತಾಟ,
ನಮ್ಮ ಪರದಾಟ,
ಓಡುವ ಅದರ ಜೊತೆಯಲ್ಲಿ ಓಡಿ..
ಹಿಡಿಯುವ ಆಟ..
ಓದಿ.ನನ್ನ ಒಂದು ಕವನ.
ಚರ..
ನನ್ನ ಬ್ಲಾಗ್ ನಲ್ಲಿ.ನಿಮಗೆ ಇಷ್ಟ ಆಗಬಹುದು.
Post a Comment