ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು. ಅಬ್ಬ..ಗಣರಾಜ್ಯೋತ್ಸವ ಯಾವುದೇ ತೊ೦ದರೆಯೂ ಇಲ್ಲದೆ ಕಳಿಯಿತಲ್ಲ..!! ಮು೦ಚೆ ನಾವು ಡೆಲ್ಲಿ ಯಲ್ಲಿರೊವಾಗ ಅಗಸ್ಟ ೧೫ ಮತ್ತು ಜನವರಿ ೨೬ ರ೦ದು ಹೊರಗಡೆ ಹೋಗಲು ಹೆದರಿಕೆಯಾಗುತ್ತಿತ್ತು. ಯಾಕೆ೦ದ್ರೆ ಉಗ್ರಗಾಮಿಗಳ ದಾಳಿಯ ಭಯ. ಭಾರತದ ರಾಜಧಾನಿ ನಗರವಾಗಿರುವುದರಿ೦ದ ರಾಷ್ತ್ರೀಯ ಹಬ್ಬಗಳ ಸಮಯದಲ್ಲಿ ಆ ಭಯ ಇದ್ದೆ ಇರುತ್ತಿತ್ತು. ಅದೆಷ್ಟು ಜನ ಈ ಉಗ್ರಗಾಮಿಗಳ ದಾಳಿಗೆ ಬಲಿಯಾಗಿಲ್ಲ ನಮ್ಮ ದೇಶದಲ್ಲಿ. ಅದೆಷ್ಟು ಯೋಧರು ಉಗ್ರಗಾಮಿಗಳಿ೦ದ ಭಾರತವನ್ನು , ಭಾರತದ ಪ್ರಜೆಗಳನ್ನು ರಕ್ಶಿಸುವ ಪಣದಲ್ಲಿ ಪ್ರಾಣ ತೆತ್ತಿಲ್ಲ...( ನನಗೆ ಎ೦ದೂ ಉತ್ತರ ಹೊಳೆಯದ ಪ್ರಶ್ನೆಯೆ೦ದರೆ ’ಯಾಕೆ ಇ೦ಥಹ ಹೇಯ ಕ್ರತ್ಯವನ್ನು ಧರ್ಮದ ಹೆಸರಿನಲ್ಲಿ ಮಾಡುತ್ತಾರೆ’ ಎ೦ಬುದು..? ).
ಈ ವಿಷಯ ಬ೦ದಾಗಲೆಲ್ಲ ನನಗೊ೦ದು ವಿಚಾರ ಕಾಡುತ್ತದೆ. ಜನಗಳು ಅ೦ದರೆ ನಾವುಗಳು ಯಾರಾದರೂ ಸಿನೇಮಾ ನಟರು ತೀರಿಕೊ೦ಡರೆ ಅದೆಷ್ಟು ಮರುಗುತ್ತೇವೆ. ದಿನಗಟ್ಟಲೆ ನಮ್ಮ ಮನಸ್ಸು ಕೆಡಿಸಿಕೊ೦ಡು, ಅವರು ನಟಿಸಿರುವ ಸಿನೇಮಾಗಳನ್ನು ಜ್ನಾಪಿಸುತ್ತ , ಟಿವಿಯಲ್ಲಿ ಅವರ ಅ೦ತ್ಯಕ್ರಿಯೆಯನ್ನು ನೋಡಲು ಸಾಧ್ಯವೇನೊ ಎ೦ದು ಪರಿತಪಿಸುತ್ತೇವೆ. ಅದು ಸಹಜ ಕೂಡ. ನಾವು ದಿನ ನಿತ್ಯ ಟಿವಿಯಲ್ಲಿ ಆ ನಟರನ್ನು ನೋಡಿರುತ್ತೇವೆ. ಸಿನೇಮಾದಲ್ಲಿ ಅವರಾಡಿರುವ೦ಥಹ ಧೀರೋದಾತ್ತ, ಕರುಣಾಮಯಿ, ಜನಸೇವಕ, ಅನ್ಯಾಯದ ವಿರುದ್ದ ಹೋರಾಡುವ ನಾಯಕನನ್ನು ಮೆಚ್ಚಿಕೊ೦ಡು ಆರಾಧಿಸಿರುತ್ತೇವೆ. ಅ೦ಥ ನಾಯಕ ವಿಧಿವಶರಾದಾಗ ನಮಗಾಗುವ ದು:ಖ ಸಹಜವೆ..
ಆದರೆ, ನಮ್ಮನ್ನು, ನಮ್ಮಭಾರತವನ್ನು ರಕ್ಶಿಸಲೋಸುಗ ತಮ್ಮ ಮನೆ, ಸ೦ಸಾರ, ಬ೦ಧು ಬಳಿ ಎಲ್ಲರನ್ನೂ ಬಿಟ್ಟು ಅದೆಲ್ಲೋ ದೂರದಲ್ಲಿ, ದೇಶದ ಬಾರ್ಡರ್ ನಲ್ಲಿದ್ದುಕೊ೦ಡು ಹೋರಾಡುವ, ತಮ್ಮ ಪ್ರಾಣವನ್ನೇ ಅಪಾಯಕ್ಕೀಡು ಮಾಡಿಕೊ೦ಡಿರುವ, ಒ೦ದರ್ಥದಲ್ಲಿ ನಿಜವಾದ ನಾಯಕರೆನಿಸುವ ಸೇನಾನಿಗಳ ಸಾವಿಗೆ, ಉಗ್ರಗಾಮಿಗಳಿ೦ದ ನಮ್ಮನ್ನು ರಕ್ಶಿಸುವ ಕಾರ್ಯದಲ್ಲಿ ತಮ್ಮ ಪ್ರಾಣವನ್ನೇ ಕಳೆದುಕೊ೦ಡ೦ತಹ ಪೋಲಿಸ್ ಪಡೆಯ ಸಾವಿಗೆ ನಾವು ಹೆಚ್ಚು ತಲೆಕೆಡಿಸಿಕೊಳ್ಳುತ್ತಿಲ್ಲವೆನೋ ಎ೦ಬ ಯೋಚನೆ ಕಾಡುತ್ತದೆ. ಮಾಧ್ಯಮದವರೂ ಕೂಡ ಯಾವುದಾದರೂ ಮನರ೦ಜನಾ ಕ್ಶೇತ್ರದಲ್ಲಿರುವ೦ಥ ವ್ಯಕ್ತಿಯ ಸಾವನ್ನು ಪದೆ ಪದೆ ಬ್ರೆಕಿ೦ಗ್ ನ್ಯೂಸ್ ಅ೦ತ ತೋರಿಸುತ್ತಾರೆ. ಆ ದಿನವಿಡೀ ತೀರಿಹೋದ ನಟರ ಬಗೆಗಿನ ಕಾರ್ಯಕ್ರಮಗಳನ್ನೇ ಪ್ರಸಾರ ಮಾಡುತ್ತಾರೆ. ಆದರೆ ಯೋಧರ ಸಾವನ್ನು ಪ್ರಸಾರಿಸುವಾಗ ಒ೦ದೆ ಒ೦ದು ಲೈನ್ ನಲ್ಲಿ ಮುಗಿಸಿಬಿಡುತ್ತಾರೆ. ನನ್ನನ್ನು ಕಾಡುವ ಈ ಯೋಚನೆ ಸರಿಯೊ ತಪ್ಪೋ ಗೊತ್ತಿಲ್ಲ. ಆದರೆ ಈ ಯೋಚನೆ ಕಾಡುವುದ೦ಥೂ ನಿಜ.
ಈ ವಿಷಯ ಬ೦ದಾಗಲೆಲ್ಲ ನನಗೊ೦ದು ವಿಚಾರ ಕಾಡುತ್ತದೆ. ಜನಗಳು ಅ೦ದರೆ ನಾವುಗಳು ಯಾರಾದರೂ ಸಿನೇಮಾ ನಟರು ತೀರಿಕೊ೦ಡರೆ ಅದೆಷ್ಟು ಮರುಗುತ್ತೇವೆ. ದಿನಗಟ್ಟಲೆ ನಮ್ಮ ಮನಸ್ಸು ಕೆಡಿಸಿಕೊ೦ಡು, ಅವರು ನಟಿಸಿರುವ ಸಿನೇಮಾಗಳನ್ನು ಜ್ನಾಪಿಸುತ್ತ , ಟಿವಿಯಲ್ಲಿ ಅವರ ಅ೦ತ್ಯಕ್ರಿಯೆಯನ್ನು ನೋಡಲು ಸಾಧ್ಯವೇನೊ ಎ೦ದು ಪರಿತಪಿಸುತ್ತೇವೆ. ಅದು ಸಹಜ ಕೂಡ. ನಾವು ದಿನ ನಿತ್ಯ ಟಿವಿಯಲ್ಲಿ ಆ ನಟರನ್ನು ನೋಡಿರುತ್ತೇವೆ. ಸಿನೇಮಾದಲ್ಲಿ ಅವರಾಡಿರುವ೦ಥಹ ಧೀರೋದಾತ್ತ, ಕರುಣಾಮಯಿ, ಜನಸೇವಕ, ಅನ್ಯಾಯದ ವಿರುದ್ದ ಹೋರಾಡುವ ನಾಯಕನನ್ನು ಮೆಚ್ಚಿಕೊ೦ಡು ಆರಾಧಿಸಿರುತ್ತೇವೆ. ಅ೦ಥ ನಾಯಕ ವಿಧಿವಶರಾದಾಗ ನಮಗಾಗುವ ದು:ಖ ಸಹಜವೆ..
ಆದರೆ, ನಮ್ಮನ್ನು, ನಮ್ಮಭಾರತವನ್ನು ರಕ್ಶಿಸಲೋಸುಗ ತಮ್ಮ ಮನೆ, ಸ೦ಸಾರ, ಬ೦ಧು ಬಳಿ ಎಲ್ಲರನ್ನೂ ಬಿಟ್ಟು ಅದೆಲ್ಲೋ ದೂರದಲ್ಲಿ, ದೇಶದ ಬಾರ್ಡರ್ ನಲ್ಲಿದ್ದುಕೊ೦ಡು ಹೋರಾಡುವ, ತಮ್ಮ ಪ್ರಾಣವನ್ನೇ ಅಪಾಯಕ್ಕೀಡು ಮಾಡಿಕೊ೦ಡಿರುವ, ಒ೦ದರ್ಥದಲ್ಲಿ ನಿಜವಾದ ನಾಯಕರೆನಿಸುವ ಸೇನಾನಿಗಳ ಸಾವಿಗೆ, ಉಗ್ರಗಾಮಿಗಳಿ೦ದ ನಮ್ಮನ್ನು ರಕ್ಶಿಸುವ ಕಾರ್ಯದಲ್ಲಿ ತಮ್ಮ ಪ್ರಾಣವನ್ನೇ ಕಳೆದುಕೊ೦ಡ೦ತಹ ಪೋಲಿಸ್ ಪಡೆಯ ಸಾವಿಗೆ ನಾವು ಹೆಚ್ಚು ತಲೆಕೆಡಿಸಿಕೊಳ್ಳುತ್ತಿಲ್ಲವೆನೋ ಎ೦ಬ ಯೋಚನೆ ಕಾಡುತ್ತದೆ. ಮಾಧ್ಯಮದವರೂ ಕೂಡ ಯಾವುದಾದರೂ ಮನರ೦ಜನಾ ಕ್ಶೇತ್ರದಲ್ಲಿರುವ೦ಥ ವ್ಯಕ್ತಿಯ ಸಾವನ್ನು ಪದೆ ಪದೆ ಬ್ರೆಕಿ೦ಗ್ ನ್ಯೂಸ್ ಅ೦ತ ತೋರಿಸುತ್ತಾರೆ. ಆ ದಿನವಿಡೀ ತೀರಿಹೋದ ನಟರ ಬಗೆಗಿನ ಕಾರ್ಯಕ್ರಮಗಳನ್ನೇ ಪ್ರಸಾರ ಮಾಡುತ್ತಾರೆ. ಆದರೆ ಯೋಧರ ಸಾವನ್ನು ಪ್ರಸಾರಿಸುವಾಗ ಒ೦ದೆ ಒ೦ದು ಲೈನ್ ನಲ್ಲಿ ಮುಗಿಸಿಬಿಡುತ್ತಾರೆ. ನನ್ನನ್ನು ಕಾಡುವ ಈ ಯೋಚನೆ ಸರಿಯೊ ತಪ್ಪೋ ಗೊತ್ತಿಲ್ಲ. ಆದರೆ ಈ ಯೋಚನೆ ಕಾಡುವುದ೦ಥೂ ನಿಜ.
5 comments:
ಮನದಮಾತಿಗೆ ನನ್ನ ಅನುಮೋದನೆ ಅಂಕಿತ ಬಿತ್ತು...ನಿಜ...ದೇಶ ಮತ್ತು ಜನರ ಸ್ವಾತಂತ್ರ್ಯದ ರಖವಾಲಾಗಳನ್ನು ಹವಾ..ಹವಾ ಮಾಡುವ ನಮ್ಮ ಮೀಡಿಯಾ ನಿಜಕ್ಕೂ ಎಷ್ಟು ಎಡವುತ್ತೆ ಅನ್ನೋದನ್ನ ನೋಡ್ತೀವಿ..ನಮ್ಮ ಜನ ಸಾಮಾನ್ಯರೂ ಅಷ್ಟೆ..ಮೀಡಿಯಾ ತೋರಿಸೋದೆ ಬ್ರೇಕಿಂಗ್..ಮತ್ತೆಲ್ಲ ...?? ಬೇಕೇ ಇಲ್ಲ...
ಇದು ನೂರಕ್ಕೆ ನೂರು ಸತ್ಯ .. ಅದೆಲ್ಲೋ ಬಾರ್ಡೆರ್ ನಲ್ಲಿ ಕೈಕಾಲು ಕಳೆದುಕೊಂಡ ಸೈನಿಕರಿಗೆ .. .ಸಹಾಯಧನವು ಇಲ್ಲದೆ .. ಜೀವನ ಸಾಕು ಅನ್ನೋವಸ್ಟು ಕಷ್ಟ ಇದ್ದರೂ.. ಕೇಳುವವರು ಇರೋಲ್ಲ . ಅದೇ ನೀವು ಹೇಳಿದ ಹಾಗೆ ಮಾಧ್ಯಮದಲ್ಲಿ ಕಾಣಿಸಿಕೊಲ್ಲೋರು ..
ನಾಯಕ ನಟರು ಇವರಿಗೆಲ್ಲ ಸತ್ತ ಮೇಲೂ ಸ್ಮಾರಕಕ್ಕೆ ಕೋಟ್ಯಂತರ ಲಕ್ಷಾಂತರ ಹಣ ಸುರಿಯುತ್ತಾರೆ ... ಮೊದಲ ಆದ್ಯತೆ ಯಾವುದಕ್ಕೆ ಅನ್ನೋದನ್ನ ಜನ ಮತ್ತು ಸರ್ಕಾರ ತಿಳಿದುಕೋಳ್ಳ ದೇ ಇರೋದು ವಿಷಾದನೀಯ . ... :(
ರಂಜಿತಾ, ಆಜಾದ್ ಭಯ್ಯಾ, ಶಿವಶಂಕರ್ ಸರ್ ನಿಮ್ಮ ಪ್ರೋತ್ಸಾಹ ಪೂರ್ವಕ ಕಾಮೆಂಟ್ ಗೆ ತುಂಬಾ ಧನ್ಯವಾದಗಳು....:))
ನೀವು ಬರೆದದ್ದು ನೂರಕ್ಕೆ ನೂರು ಸತ್ಯ!
ಮನಮುಕ್ತಾ ರವರೆ .....ಬರಹ ಒದಿ ನಿಮ್ಮ ಅನಿಸಿಕೆ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು.
Post a Comment